ನಮ್ಮೂರ ಹೋಳಿ ಹಾಡು – ೪

ಹರಿ ವಿರಂಚಿಯೂ ಕೂಡಿ
ಗುರು ಬೃಹಸ್ಪತಿ|
ಕೂಡಿ ಗುರು ಬೃಹಸ್ಪತಿ
ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ||

ಹರನ ತಪವನುಽ
ಕೆಡಿಸಿ ಸ್ಮರಗೆ ಬೋಧಿಸು|
ಕೆಡಿಸಿ ಸ್ಮರಗೆ ಬೋಧಿಸು
ಸುರರ ಬಾದೆಯ
ಬ್ಯಾಗ ಪರಿಹರಿಸುವುದು||೧||

ಅಕ್ಷ ಮೂರ್ತಿಯಽ
ತಪವು ಭ್ರಷ್ಟವಾದರೆ
ತಪವು ಭ್ರಷ್ಟವಾದರೆ
ಹುಟ್ಟಿ ಷಣ್ಮುಖಾಽ
ಖಳನ ನಷ್ಟ ಮಾಡುವ||೨||

ಗುರು ಬೃಹಸ್ಪತಿ ಸ್ಮರಗೆ
ಪರಿ ಪರಿಗಳಿಂದಲಿ
ಸ್ಮರಗೆ ಪರಿಪರಿಗಳಿಂದಲಿ
ಕರದಿ ಕರವನು ಹಾಕಿ
ಭರದಿ ಪೇಳಲು||೩||

ಮೋಸದಿಂದಲಿ ಸ್ಮರನು
ಭಾಷೆಗೊಂಡನು
ಈಶ ಮಾಡುವಾ ತಪವ
ನಾಶಗೈವುದು||೪||

ಅಂದ ಮಾತನು ಕೇಳಿ
ನೊಂದ ಮದನನು
ಕೇಳಿ ನೊಂದ ಮದನನು
ಕುಂದಿ ಕೊರಗುತಽ
ಮನದಿ ಮುಂದು ಗೆಟ್ಟನು||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧನಾಗುವ ಬಯಕೆ
Next post ಚುಕು ಬುಕು ರೈಲು

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys